ಕಲಬುರಗಿ : ಟಂ ಟಂ ಮತ್ತು ಲಾರಿ ನಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗು ಸಾವಿಗೀಡಾದ ದುರ್ಘಟನೆ ಕಲ್ಬುರ್ಗಿ ಜಿಲ್ಲೆಯಲ್ಲಿ ಸಂಭವಿಸಿದೆ.
ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ನಾಲ್ವರು ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಟಂಟಂ ಲಾರಿ ಡಿಕ್ಕಿ ತಾಯಿ ಮಗು ಸಾವು

ದುರಂತದಲ್ಲಿ 30 ವರ್ಷದ ಶರಣಮ್ಮ ಹಾಗೂ ಆಕೆಯ ಮೂರು ತಿಂಗಳ ಮಗು ರಾಘವೇಂದ್ರ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಮೃತ ಶರಣಮ್ಮಳ ಅತ್ತೆ ಸಾಬಮ್ಮ ಮತ್ತು ಆಟೋ ಚಾಲಕ ಖಾಜಾ ಪಟೇಲ್ ಗಂಭೀರವಾಗಿ ಗಾಯಗೊಂಡಿದ್ದಾರೆ .
Read thisl also : ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರ ಗುಂಡಾ ವರ್ತನೆಗೆ ಕೆ ನೀಲಾ ಆಕ್ರೋಶ
ಗಾಯಾಳುಗಳನ್ನ ಕಲ್ಬುರ್ಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ನಡೆದ ಸ್ಥಳಕ್ಕೆ ವಾಡಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಯ ಮೇಲಿದ್ದ ವಾಹನಗಳನ್ನು ಪಕ್ಕಕ್ಕೆ ಸೇರಿಸಲು ಅನು ಮಾಡಿ ಸಂಚಾರ ಸುಮಗವಾಗುವಂತೆ ಮಾಡಿದ್ದಾರೆ.
ಈ ಅಪಘಾತದ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







